Vidarbha Team: ಕರ್ನಾಟಕಕ್ಕೆ ಮರಳಿಕ ಕರುಣ್! ಅತ್ತ ನಾಯರ್ ಬದಲಿಗೆ ವಿದರ್ಭ ಸೇರಿದ ಮತ್ತೊಬ್ಬ ಕನ್ನಡಿಗ | After Karun Nair, Vidarbha’s Next Big Catch: Ravikumar Samarth Joins the Team | ಕ್ರೀಡೆ

Vidarbha Team: ಕರ್ನಾಟಕಕ್ಕೆ ಮರಳಿಕ ಕರುಣ್! ಅತ್ತ ನಾಯರ್ ಬದಲಿಗೆ ವಿದರ್ಭ ಸೇರಿದ ಮತ್ತೊಬ್ಬ ಕನ್ನಡಿಗ | After Karun Nair, Vidarbha’s Next Big Catch: Ravikumar Samarth Joins the Team | ಕ್ರೀಡೆ

Last Updated:

ಕರುಣ್ ನಾಯರ್ ಅವರಂತೆಯೇ ಬಲಗೈ ಟಾಪ್-ಆರ್ಡರ್ ಬ್ಯಾಟ್ಸ್‌ಮನ್ ಆಗಿರುವ ಸಮರ್ಥ್ 2013 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು ಮತ್ತು 95 ಪಂದ್ಯಗಳಲ್ಲಿ 15 ಶತಕಗಳು ಮತ್ತು 35 ಅರ್ಧಶತಕಗಳೊಂದಿಗೆ 6157 ರನ್ ಗಳಿಸಿದ್ದಾರೆ.

ರವಿಕುಮಾರ್ ಸಮರ್ಥ್ರವಿಕುಮಾರ್ ಸಮರ್ಥ್
ರವಿಕುಮಾರ್ ಸಮರ್ಥ್

ರಣಜಿ (Ranji) ಚಾಂಪಿಯನ್ ವಿದರ್ಭ (Vidarbha) ತಂಡಕ್ಕೆ ಮತ್ತೊಬ್ಬ ಕರ್ನಾಟಕದ (Karnataka) ಆಟಗಾರ ಸೇರ್ಪಡೆಗೊಳ್ಳಲು ಸಜ್ಜಾಗಿದ್ದಾರೆ. ಗಣೇಶ್ ಸತೀಶ್ ಮತ್ತು ಕರುಣ್ ನಾಯರ್ (Ganesh Sathish and Karun Nair) ಅವರಂತಹ ಆಟಗಾರರು ಕರ್ನಾಟಕದಿಂದ (Karnataka) ವಲಸೆ ಬಂದು ವಿದರ್ಭ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಇತ್ತೀಚೆಗೆ ರವಿಕುಮಾರ್ ಸಮರ್ಥ್ ಕೂಡ ಅವರ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ. ಮುಂಬರುವ ದೇಶೀಯ ಋತುವಿಗಾಗಿ ಸಮರ್ಥ್ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಒಪ್ಪಂದ ಕುದುರಿರುವಂತೆ ತೋರುತ್ತಿದೆ. ಸಮರ್ಥ್ ಕರ್ನಾಟಕದವರಾಗಿದ್ದರೂ, ಕಳೆದ ಋತುವಿನಲ್ಲಿ ಉತ್ತರಾಖಂಡಕ್ಕೆ ವಲಸೆ ಹೋಗಿದ್ದರು.

6000 ರನ್ ಗಳಿಸಿರುವ ಸಮರ್ಥ್

ಇತ್ತೀಚೆಗೆ ಕರುಣ್ ನಾಯರ್ ತವರು ತಂಡ ಕರ್ನಾಟಕಕ್ಕೆ ಮರಳುವ ಉದ್ದೇಶದಿಂದ ವಿದರ್ಭ ತೊರೆದಿದ್ದಾರೆ. 32 ವರ್ಷದ ಸಮರ್ಥ್ ಕಳೆದ ವರ್ಷ ಹೊರತುಪಡಿಸಿ ತಮ್ಮ ಇಡೀ ವೃತ್ತಿಜೀವನವನ್ನು ಕರ್ನಾಟಕಕ್ಕಾಗಿ ಆಡಿದ್ದಾರೆ. ಕರುಣ್ ನಾಯರ್ ಅವರಂತೆಯೇ ಬಲಗೈ ಟಾಪ್-ಆರ್ಡರ್ ಬ್ಯಾಟ್ಸ್‌ಮನ್ ಆಗಿರುವ ಸಮರ್ಥ್ 2013 ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು ಮತ್ತು 95 ಪಂದ್ಯಗಳಲ್ಲಿ 15 ಶತಕಗಳು ಮತ್ತು 35 ಅರ್ಧಶತಕಗಳೊಂದಿಗೆ 6157 ರನ್ ಗಳಿಸಿದರು. ಅವರು 71 ಲಿಸ್ಟ್-ಎ ಪಂದ್ಯಗಳಲ್ಲಿ 10 ಶತಕಗಳು ಮತ್ತು 17 ಅರ್ಧಶತಕಗಳೊಂದಿಗೆ 3050 ರನ್ ಗಳಿಸಿದ್ದಾರೆ. 30 ಟಿ20ಐಗಳಲ್ಲಿ ಒಂದು ಅರ್ಧಶತಕದೊಂದಿಗೆ 459 ರನ್ ಗಳಿಸಿದ್ದಾರೆ.

ಕಳೆದ ಋತುವಿನಲ್ಲಿ ಸಮರ್ಥ್ ಉತ್ತಮ ಆರಂಭ

ಕಳೆದ ಋತುವಿನಲ್ಲಿ ಉತ್ತರಾಖಂಡ್ ಪರವೂ ಸಮರ್ಥ್ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದರು. ಅವರು ಪ್ರಥಮ ದರ್ಜೆ ಪಂದ್ಯಗಳಲ್ಲಿ 649 ರನ್‌ಗಳು, ಲಿಸ್ಟ್-ಎಯಲ್ಲಿ 385 ಮತ್ತು ಟಿ20ಐಗಳಲ್ಲಿ 184 ರನ್‌ಗಳನ್ನು ಗಳಿಸಿದ್ದರು. ಸಮರ್ಥ್ ಹೇಗೆ ನೋಡಿದರೂ ಕರುಣ್ ನಾಯರ್‌ಗಿಂತ ಯಾವುದೇ ವಿಭಾಗದಲ್ಲೂ ಕಡಿಮೆಯಿಲ್ಲದ ಆಟಗಾರ, ಆದ್ದರಿಂದ ವಿದರ್ಭ ತಂಡ ಅವರನ್ನ ತಂಡಕ್ಕೆ ಸೇರಿಸಿಕೊಳ್ಳುವುದಕ್ಕೆ ಮುಂದಾಗಬಹುದು.

ಕರುಣ್ ಜಾಗಕ್ಕೆ ಸೂಕ್ತ ಆಯ್ಕೆ

ಕಳೆದ ರಣಜಿ ಋತುವಿನಲ್ಲಿ ವಿದರ್ಭವನ್ನು ಚಾಂಪಿಯನ್ ಮಾಡುವಲ್ಲಿ ಕರುಣ್ ಪ್ರಮುಖ ಪಾತ್ರ ವಹಿಸಿದ್ದರು. ಅದರ ನಂತರ, ಅವರು ವೈಯಕ್ತಿಕ ಕಾರಣಗಳಿಂದ ತಮ್ಮ ತವರು ರಾಜ್ಯ ಕರ್ನಾಟಕಕ್ಕೆ ಮರಳಿದ್ದಾರೆ. ಕಳೆದ ರಣಜಿ ಋತುವಿನಲ್ಲಿ ವಿದರ್ಭ ಪರ ಕರುಣ್ 9 ಪಂದ್ಯಗಳಲ್ಲಿ 863 ರನ್ ಗಳಿಸಿದ್ದರು. ಕರುಣ್ ಅವರ ಸ್ಥಾನ ತುಂಬುವುದು ವಿದರ್ಭಕ್ಕೆ ಕಷ್ಟಕರವಾದರೂ, ಸಮರ್ಥ್ ಕರುಣ್​ಗೆ ಸೂಕ್ತ ಆಯ್ಕೆಯಾಗಿದ್ದಾರೆ.