Virat Kohli: ಅದೊಂದು ಕಾರಣಕ್ಕೆ ನಾನು ಆರ್​ಸಿಬಿ ನಾಯಕತ್ವ ತೊರೆದೆ! 4 ವರ್ಷಗಳ ಬಳಿಕ ಕಾರಣ ಬಹಿರಂಗಪಡಿಸಿದ ಕೊಹ್ಲಿ | Virat Kohli Reveals True Reason for Quitting India and RCB Captaincy It Became Too Much

Virat Kohli: ಅದೊಂದು ಕಾರಣಕ್ಕೆ ನಾನು ಆರ್​ಸಿಬಿ ನಾಯಕತ್ವ ತೊರೆದೆ! 4 ವರ್ಷಗಳ ಬಳಿಕ ಕಾರಣ ಬಹಿರಂಗಪಡಿಸಿದ ಕೊಹ್ಲಿ | Virat Kohli Reveals True Reason for Quitting India and RCB Captaincy It Became Too Much

Last Updated:

ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕತ್ವದಿಂದ ದೂರ ಉಳಿಯಲು ಒತ್ತಡವೇ ಕಾರಣ ಎಂದು ಹೇಳಿದ್ದಾರೆ. 2016-2019 ಐಪಿಎಲ್ ಸೀಸನ್‌ಗಳಲ್ಲಿ ನಿರೀಕ್ಷೆಗಳ ಒತ್ತಡದಿಂದಾಗಿ ಈ ನಿರ್ಧಾರ ತೆಗೆದುಕೊಂಡರು.

ವಿರಾಟ್ ಕೊಹ್ಲಿವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ (Virat Kohli) ಹೆಸರು ಕೇಳಿದಾಗ ಮೊದಲು ನೆನಪಿಗೆ ಬರುವುದು ಬ್ಯಾಟಿಂಗ್, ಚೇಸಿಂಗ್​. ವಿರಾಟ್ ಕೊಹ್ಲಿ ಸಹಸ್ರಾರು ರನ್‌ಗಳು ಮತ್ತು ದಾಖಲೆಗಳ ಮೇಲೆ ದಾಖಲೆಗಳೊಂದಿಗೆ ಇತಿಹಾಸ ಸೃಷ್ಟಿಸಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ಆಟ ಮತ್ತು ನಾಯಕತ್ವದಿಂದಾಗಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ ಯಾವುದೇ ಪಂದ್ಯದಲ್ಲೂ ಆಕ್ರಮಣಕಾರಿಯಾಗಿ ಆಡುತ್ತಾರೆ. ಕಿಂಗ್ ಕೊಹ್ಲಿ ತಂಡವನ್ನು ಮುನ್ನಡೆಸುವ ರೀತಿ ಮತ್ತು ಅವರ ಯೋಜನೆ ಮತ್ತು ನಾಯಕತ್ವ ಅದ್ಭುತವಾಗಿದೆ. ಆದರೆ ವಿರಾಟ್ ಕೊಹ್ಲಿ ಭಾರತೀಯ ತಂಡದ ಜೊತೆಗೆ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳ ನಾಯಕತ್ವದಿಂದ ದೂರ ಉಳಿದಿದ್ದಾರೆ. ಕಿಂಗ್ ಕೊಹ್ಲಿ ನಾಯಕತ್ವದಿಂದ ದೂರ ಉಳಿಯಲು ಕಾರಣವೇನು ಎಂಬುದರ ಕುರಿತು ವಿರಾಟ್ ಇತ್ತೀಚಿನ ಸಂದರ್ಶನವೊಂದರಲ್ಲಿ ಪ್ರಮುಖ ವಿವರಗಳನ್ನು ಬಹಿರಂಗಪಡಿಸಿದರು. ವಿರಾಟ್ ಕೊಹ್ಲಿ ಆರ್‌ಸಿಬಿ ತಂಡಕ್ಕೆ ರಾಜೀನಾಮೆ ನೀಡಿದ ಹಿಂದಿನ ಕಾರಣಗಳನ್ನು ಸಹ ಹಂಚಿಕೊಂಡಿದ್ದಾರೆ.

ಅದ್ಭುತ ಪ್ರದರ್ಶನ ನೀಡಬೇಕಾದ ಒತ್ತಡ

ಐಪಿಎಲ್ 2016 ರಿಂದ ಐಪಿಎಲ್ 2019 ರವರೆಗಿನ 3 ಸೀಸನ್‌ಗಳಿಗೆ ನಾನು ತುಂಬಾ ಒತ್ತಡದಲ್ಲಿದ್ದೆ ಎಂದು ವಿರಾಟ್ ಕೊಹ್ಲಿ ಹೇಳಿದರು. ಆ ಮೂರು ವರ್ಷಗಳ ಕಾಲ ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಬ್ಯಾಟ್ಸ್‌ಮನ್ ಮತ್ತು ನಾಯಕನಾಗಿದ್ದೆ, ಆದರೆ ನಾನು ಆಡಿದ ಪ್ರತಿಯೊಂದು ಪಂದ್ಯದಲ್ಲೂ ಅದ್ಭುತ ಪ್ರದರ್ಶನ ನೀಡಬೇಕಾದ ಒತ್ತಡ ನನ್ನ ಮೇಲೆ ಇತ್ತು ಎಂದು ವಿರಾಟ್ ಕೊಹ್ಲಿ ಹೇಳಿದರು. ಪ್ರತಿ ಪಂದ್ಯದಲ್ಲೂ ಬ್ಯಾಟ್ಸ್‌ಮನ್ ಆಗಿ ಯಶಸ್ವಿಯಾಗುವುದರ ಜೊತೆಗೆ, ನಾಯಕನಾಗಿ ಅವರ ಮೇಲಿನ ನಿರೀಕ್ಷೆಗಳು ಕೂಡ ಅಗಾಧವಾಗಿ ಹೆಚ್ಚಿದ್ದವು ಎಂದು ವಿರಾಟ್ ಕೊಹ್ಲಿ ಬಹಿರಂಗಪಡಿಸಿದರು. ಟೀಮ್ ಇಂಡಿಯಾ ಹಾಗೂ ಆರ್‌ಸಿಬಿ ಮೇಲಿನ ಹೆಚ್ಚಿನ ನಿರೀಕ್ಷೆಗಳು ಮತ್ತು ಒತ್ತಡದಿಂದಾಗಿ ಕಿಂಗ್ ಕೊಹ್ಲಿ ನಾಯಕತ್ವದಿಂದ ದೂರ ಉಳಿದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಜವಾಬ್ದಾರಿ ನಿಭಾಯಿಸಲು ಸಾಧ್ಯವಾಗಲಿಲ್ಲ

ನಾಯಕನಾಗಿ ಹಾಗೂ ಬ್ಯಾಟಿಂಗ್‌ನಲ್ಲಿ ಯಶಸ್ಸು ಸಾಧಿಸುವ ನಿರೀಕ್ಷೆಗಳಿಂದ ಒತ್ತಡಕ್ಕೊಳಗಾಗಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದರು. ಕೊಹ್ಲಿ ಪ್ರತಿದಿನ ಒಂದೇ ರೀತಿಯ ಆಲೋಚನೆಯಲ್ಲಿ ಸಿಲುಕಿದ್ದು, ಅದನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಅದಕ್ಕಾಗಿಯೇ ವಿರಾಟ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕತ್ವಕ್ಕೆ ವಿದಾಯ ಹೇಳಿದ್ದಾಗಿ ಬಹಿರಂಗಪಡಿಸಿದರು. ಬ್ಯಾಟ್ಸ್‌ಮನ್ ಆಗಿ ಉತ್ತಮ ಪ್ರದರ್ಶನ ನೀಡಲು ಹಾಗೂ ಕ್ರಿಕೆಟ್​​ನಲ್ಲಿ ಹೆಚ್ಚು ಕಾಲ ಉಳಿಯಲು ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಅವರು ಹೇಳಿದ್ದಾರೆ.

ಅವರು ನನ್ನ ಜೀವನದಲ್ಲಿ ವಿಶೇಷ ವ್ಯಕ್ತಿ

ಇಶಾಂತ್ ಜೊತೆ ನನಗೆ ಸ್ನೇಹ ಸಂಬಂಧವಿದೆ ಎಂದು ವಿರಾಟ್ ಕೊಹ್ಲಿ ಹೇಳಿದರು. ಇಶಾಂತ್ ನನ್ನ ಜೀವನದಲ್ಲಿ ತುಂಬಾ ವಿಶೇಷ ವ್ಯಕ್ತಿ. ಏಕೆಂದರೆ ಅವರು ನನ್ನೊಂದಿಗೆ ಎಲ್ಲವನ್ನೂ ಹಂಚಿಕೊಳ್ಳಬಲ್ಲರು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆರು. ವಿರಾಟ್ ಅವರು ತಾಂತ್ರಿಕವಾಗಿ ಉತ್ತಮ ಆಟಗಾರನಲ್ಲ ಅಥವಾ ಸ್ವಾಭಾವಿಕವಾಗಿ ಪ್ರತಿಭಾನ್ವಿತ ಬ್ಯಾಟ್ಸ್​ಮನ್ ಅಲ್ಲ ಎಂದು ಹೇಳಿಕೊಳ್ಳಲು ನಾಚಿಕೆಯಿಲ್ಲ ಎಂದರು.