Last Updated:
ಪಂದ್ಯದಲ್ಲಿ ಗೆಲುವು ಸಾಧಿಸಿದ ಸಂತಸವನ್ನು ಎಕ್ಸ್ ನಲ್ಲಿ ಪೋಸ್ಟ್ ನಲ್ಲಿ ವ್ಯಕ್ತಪಡಿಸಿರುವ ಗಿಲ್, ‘ನಮ್ಮ ಗಮನ ಆಟದ ಮೇಲಿದೆ, ಗದ್ದಲ ಮತ್ತು ಅರಚಾಟದ ಮೇಲೆ ಅಲ್ಲ’ ಎಂಬ ದ್ವಂದ್ವರ್ಥವನ್ನು ನೀಡುವ ಪೋಸ್ಟ್ ಹಾಕಿದ್ದಾರೆ.
ಬೆಂಗಳೂರು: ಐಪಿಎಲ್ 2025ರ (IPL 2025) ಭಾಗವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) (Royal Challengers Bengaluru) ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಆದರೆ, ಈ ಪಂದ್ಯದ ಗೆಲುವಿನ ನಂತರ ಗುಜರಾತ್ ತಂಡದ ನಾಯಕ ಶುಭ್ಮನ್ ಗಿಲ್ (Shubman Gill) ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಒಂದು ಪೋಸ್ಟ್ ಹೊಸ ವಿವಾದಕ್ಕೆ ಕಾರಣವಾಗಿದೆ. ಈ ಪೋಸ್ಟ್ನಿಂದಾಗಿ ಗಿಲ್ ಮತ್ತು ವಿರಾಟ್ ಕೊಹ್ಲಿ (Virat Kohli) ನಡುವೆ ಏನಾದರೂ ಮನಸ್ತಾಪ ಇದೆಯೇ ಎಂಬ ಚರ್ಚೆ ಶುರುವಾಗಿದ್ದು, ಆರ್ಸಿಬಿ ಅಭಿಮಾನಿಗಳ (RCB Fans) ಮೇಲೆ ಗಿಲ್ ಕೋಪಗೊಂಡಿದ್ದಾರೆಯೇ ಎಂಬ ಪ್ರಶ್ನೆಯೂ ಮೂಡಿದೆ.
ಗಿಲ್ ಪೋಸ್ಟ್ ನಲ್ಲಿ ಏನಿದೆ?
ಪಂದ್ಯದಲ್ಲಿ ಗೆಲುವು ಸಾಧಿಸಿದ ಸಂತಸವನ್ನು ಎಕ್ಸ್ ನಲ್ಲಿ ಪೋಸ್ಟ್ ನಲ್ಲಿ ವ್ಯಕ್ತಪಡಿಸಿರುವ ಗಿಲ್, ‘ನಮ್ಮ ಗಮನ ಆಟದ ಮೇಲಿದೆ, ಗದ್ದಲ ಮತ್ತು ಅರಚಾಟದ ಮೇಲೆ ಅಲ್ಲ’ ಎಂಬ ದ್ವಂದ್ವರ್ಥವನ್ನು ನೀಡುವ ಪೋಸ್ಟ್ ಹಾಕಿದ್ದಾರೆ. ಆದರೆ ಈ ಸಂದೇಶಗಳು ಆರ್ಸಿಬಿ ತಂಡದ ಸೋಲಿನ ಬಗ್ಗೆಯೇ ಎಂದು ಸ್ಪಷ್ಟವಾಗಿ ತಿಳಿಯುತ್ತಿದೆ. ಆದರೆ, ಕೊನೆಯ ಮೂರು ಪದಗಳು ಕ್ರಿಕೆಟ್ ಅಭಿಮಾನಿಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಹುಟ್ಟುಹಾಕಿವೆ.
ಇನ್ನು ಗಿಲ್ ಯಾವ ಘಟನೆಯ ಬಗ್ಗೆ ಪೋಸ್ಟ್ ಮಾಡಿದ್ದಾರೆ ಅಂತ ನೋಡುವುದಾದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಅಭಿಮಾನಿಗಳ ಜೋರು ಗದ್ದಲದ ಬಗ್ಗೆ ಕುರಿತು ಬರೆದಿರೋದಾ? ಅಥವಾ ಭುವನೇಶ್ವರ್ ಕುಮಾರ್, ಗಿಲ್ ಅವರ ವಿಕೆಟ್ ಪಡೆದಾಗ ಕೊಹ್ಲಿ ಉತ್ಸಾಹದಿಂದ ಕುಣಿದು ಕುಪ್ಪಳಿಸಿದ ಘಟನೆಯ ಕುರಿತ ಹೇಳಿದ್ದಾರೋ ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಆದರೆ ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳು ಈ ಪೋಸ್ಟ್ ಕೊಹ್ಲಿಗೆ ಸಂಬಂಧಿಸಿದೆ ಎಂದು ಆಥೈಸಿಸುತ್ತಿದ್ದಾರೆ.
ಇದನ್ನೂ ಓದಿ: Virat Kohli: ಆರ್ಸಿಬಿ ಅಭಿಮಾನಿಗಳಿಗೆ ಬಿಗ್ಶಾಕ್! ಸ್ಟಾರ್ ಆಟಗಾರ ಕೊಹ್ಲಿಗೆ ಗಂಭೀರ ಗಾಯ! ಮುಂದಿನ ಪಂದ್ಯಕ್ಕೆ ಇರಲ್ವಾ?
ಆದರೆ ಕೆಲವರು ಶುಬ್ ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ವಾದಿಸುತ್ತಿದ್ದಾರೆ. ಪಂದ್ಯದ ವೇಳೆ ಇಬ್ಬರೂ ಸಾಮಾನ್ಯವಾಗಿಯೇ ಮಾತನಾಡುತ್ತಾ ನಗುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಶುಭ ಮನ್ ಗಿಲ್ ಪೋಸ್ಟ್
ಆದರೆ, ಐಪಿಎಲ್ 2023ರಲ್ಲಿ ಆರ್ಸಿಬಿ ವಿರುದ್ಧ ಗುಜರಾತ್ ಗೆದ್ದಾಗ, ಗಿಲ್ ಅವರ ಸಹೋದರಿ ಶಾನೀಲ್ ಹಾಕಿದ್ದ ಪೋಸ್ಟ್ಗೆ ಆರ್ಸಿಬಿ ಅಭಿಮಾನಿಗಳು ಟ್ರೋಲ್ ಮಾಡಿದ್ದರು. ಈಗ ಅದಕ್ಕೆ ಪ್ರತಿಕ್ರಿಯೆಯಾಗಿ ಗಿಲ್ ಈ ಪೋಸ್ಟ್ ಹಾಕಿರಬಹುದು ಎಂಬ ಅಭಿಪ್ರಾಯವೂ ಇದೆ. ಈ ವಿವಾದವು ಕ್ರಿಕೆಟ್ ಜಗತ್ತಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಗಿಲ್ ಉದ್ದೇಶ ಏನೇ ಇರಲಿ, ಈ ಪೋಸ್ಟ್ ಆರ್ಸಿಬಿ ತಂಡ ಮತ್ತು ಅದರ ಅಭಿಮಾನಿಗಳ ಗಮನ ಸೆಳೆದಿದೆ.
Bangalore [Bangalore],Bangalore,Karnataka
April 03, 2025 1:05 PM IST