Last Updated:
ಜೀವಂತ ನಾಯಿಗಳನ್ನು ಬೋನಿನಲ್ಲಿ ಇರಿಸಿ ಚಿರತೆಗಾಗಿ ಕಾಯಲಾಗುತ್ತದೆ. ನಾಯಿಗಳನ್ನು ಬೋನಿನಲ್ಲಿ ಇರಿಸುವುದಕ್ಕೆ ಪ್ರಾಣಿದಯಾ ಸಂಘಗಳ ಭಾರೀ ವಿರೋಧವಿದ್ದರೂ, ಅನಿವಾರ್ಯವಾಗಿ ಇಲಾಖೆ ಈ ಕಾರ್ಯವನ್ನು ಈ ಹಿಂದಿನಂತೆ ಮಾಡಿಕೊಂಡು ಬರುತ್ತಿದೆ.
ದಕ್ಷಿಣ ಕನ್ನಡ: ಕಾಡು ಪ್ರಾಣಿಗಳು(Wild Animals) ತಮ್ಮ ಕಾಡನ್ನು ಬಿಟ್ಟು ನಾಡಿನ ಕಡೆ ಬಂದಲ್ಲಿ ಅವುಗಳನ್ನು ಹಿಡಿದು ಮತ್ತೆ ಕಾಡಿಗೆ ಬಿಡೋ ತನಕ ಎಲ್ಲರಿಗೂ ಸಮಸ್ಯೆಯೇ. ಮುಖ್ಯವಾಗಿ ಗ್ರಾಮದ ಜನರು, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಪಂಚಾಯತ್ ಹೀಗೆ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ತಲೆನೋವೇ. ಆನೆ,ಚಿರತೆ, ಕಾಡುಕೋಣ, ಹುಲಿ ಹೀಗೆ ಅಪಾಯಕಾರಿ ಕಾಡು ಪ್ರಾಣಿಗಳು ನಾಡಿಗೆ ಬಂತೆಂದರೆ ಅಲ್ಲಿನ ಜನರ ಪ್ರಾಣ ಕೈಯಲ್ಲೇ ಹಿಡಿದು ಬದುಕಬೇಕಾದ ಸ್ಥಿತಿ ಇರುತ್ತೆ. ಹೀಗೆ ನಾಡಿಗೆ ಬಂದ ಕಾಡು ಪ್ರಾಣಿಗಳನ್ನು ಮತ್ತೆ ಕಾಡಿಗಟ್ಟುವ ಜವಾಬ್ದಾರಿ ಇರೋದು ಅರಣ್ಯ ಇಲಾಖೆಗೆ. ಇಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆ(Forest Department) ಆಯ್ದ ಕೆಲವು ಕಡೆಗಳಲ್ಲಿ ಬೋನುಗಳನ್ನು ಇಟ್ಟು ಪ್ರಾಣಿಗಾಗಿ ಕಾದು ಕುಳಿತುಕೊಳ್ಳುತ್ತಾರೆ.
ಹಾಗೆಂದು ಖಾಲಿ ಬೋನನ್ನು ಇಟ್ಟಲ್ಲಿ ಕಾಡುಪ್ರಾಣಿಯಲ್ಲ, ನಾಡು ಪ್ರಾಣಿಯೂ ಅತ್ತ ಮೂಸಿ ನೋಡೋದಿಲ್ಲ. ಅದಕ್ಕಾಗಿ ಅರಣ್ಯ ಇಲಾಖೆ ಸಿಬ್ಬಂದಿ ಬೋನಿನಲ್ಲಿ ಆಯಾಯ ಪ್ರಾಣಿಗಳಿಗೆ ಅನುಗುಣವಾಗಿ ಆಹಾರವನ್ನು ಬೋನಿನಲ್ಲಿ ಇಡುತ್ತಾರೆ. ಅದರಲ್ಲಿ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಸಾಮಾನ್ಯವಾಗಿ ಬಳಸೋದು ನಾಯಿಗಳನ್ನು. ಜೀವಂತ ನಾಯಿಗಳನ್ನು ಬೋನಿನಲ್ಲಿ ಇರಿಸಿ ಚಿರತೆಗಾಗಿ ಕಾಯಲಾಗುತ್ತದೆ. ನಾಯಿಗಳನ್ನು ಬೋನಿನಲ್ಲಿ ಇರಿಸುವುದಕ್ಕೆ ಪ್ರಾಣಿದಯಾ ಸಂಘಗಳ ಭಾರೀ ವಿರೋಧವಿದ್ದರೂ, ಅನಿವಾರ್ಯವಾಗಿ ಇಲಾಖೆ ಈ ಕಾರ್ಯವನ್ನು ಈ ಹಿಂದಿನಂತೆ ಮಾಡಿಕೊಂಡು ಬರುತ್ತಿದೆ.
ಇದನ್ನೂ ಓದಿ: Kolar: ಕೋಲಾರದಲ್ಲಿ ಅದ್ದೂರಿಯಾಗಿ ನಡೆದ ಶ್ರೀ ವಿರೂಪಾಕ್ಷಿ ಶ್ರೀ ಚೌಡೇಶ್ವರಿದೇವಿಯ ಬ್ರಹ್ಮ ರಥೋತ್ಸವ!
ಆದರೆ ನಾಯಿಯನ್ನು ಚಿರತೆ ಏನೂ ಮಾಡದ ರೀತಿಯಲ್ಲಿ ಬೋನಿನೊಳಗೆ ಇಡಲಾಗುತ್ತದೆ. ಇದಕ್ಕಾಗಿಯೇ ಬೋನಿನಲ್ಲಿ ಕೆಲವೊಂದು ವ್ಯವಸ್ಥೆಗಳನ್ನು ಮಾಡಲಾಗಿದ್ದು, ಎರಡು ವಿಭಾಗಗಳನ್ನು ಬೋನಿನಲ್ಲಿ ಮಾಡಲಾಗುತ್ತದೆ. ಒಂದು ಭಾಗದಲ್ಲಿ ನಾಯಿಗಳನ್ನು ಇರಿಸಿ, ಅದಕ್ಕೆ ಕಬ್ಬಿಣದ ಸಲಾಖೆಗಳನ್ನು ನಿರ್ಮಿಸಿ ಬೋನಿನೊಳಗೆ ನುಗ್ಗುವ ಚಿರತೆಗೆ ನಾಯಿಗಳನ್ನು ಕಾಣುವಂತೆ ಇರಿಸಲಾಗುತ್ತದೆ. ನಾಯಿಯ ವಾಸನೆಯನ್ನು ಹಿಡಿದ ತಕ್ಷಣವೇ ಬೋನು ಪ್ರವೇಶಿಸುವ ಚಿರತೆ, ನಾಯಿಗಳಿರುವ ಪಕ್ಕದಲ್ಲೇ ಇರುವ ಬೋನಿನ ಬಾಗಿಲು ಬೀಳುವಂತೆ ಸಿದ್ಧಪಡಿಸಲಾದ ಪ್ಲಾಟ್ ಫಾರ್ಮ್ ಗೆ ಕಾಲು ತಾಗಿದ ತಕ್ಷಣವೇ ಬೋನಿನ ಬಾಗಿಲು ಬಂದ್ ಆಗುತ್ತೆ.
ಬಾಗಿಲು ಬಂದ್ ಆದ ಬಳಿಕ ಬೋನಿನಿಂದ ಹೊರಬರೋದು ಚಿರತೆಗೆ ಸಾಧ್ಯವೇ ಆಗೋದಿಲ್ಲ. ಒಂದು ಕಡೆ ತನ್ನ ಪಕ್ಕದಲ್ಲೇ ಇರುವ ನಾಯಿಗಳನ್ನ ತಿನ್ನಲಾಗದೆ, ಇನ್ನೊಂದೆಡೆ ಬೋನಿನಿಂದ ಹೊರಬರಲಾರದೆ ಚಿರತೆ ಸುಲಭವಾಗಿ ಅರಣ್ಯ ಇಲಾಖೆಯ ಕೈಗೆ ಸಿಕ್ಕಿ ಬೀಳುತ್ತೆ. ಹೀಗೆ ಸಿಕ್ಕಿ ಬೀಳುವ ಚಿರತೆ ಅಥವಾ ಇತರ ಕಾಡುಪ್ರಾಣಿಗಳನ್ನು ಸುರಕ್ಷಿತ ಸ್ಥಳದಲ್ಲಿ ಬಿಡುವ ವ್ಯವಸ್ಥೆಯನ್ನು ಇಲಾಖೆ ಮಾಡುತ್ತೆ.
Dakshina Kannada,Karnataka
March 07, 2025 3:20 PM IST