ಒಂದೇ ದಿನ 12 ಮನೆಗಳ್ಳತನ ಪ್ರಕರಣ: ಇಬ್ಬರನ್ನು ಬಂಧಿಸಿದ ದಾವಣಗೆರೆ ಪೋಲಿಸರು; ಮೂವರಿಗಾಗಿ ತಲಾಶ್ – HOUSE BURGLARY ACCUSED ARRESTED
ಬಸವಪಟ್ಟಣ ಕಂಸಾಗರದಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣದ ಕೆಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಕೆಲವರ ಬಂಧನಕ್ಕಾಗಿ ತಲಾಶ್ ಮಾಡಲಾಗುತ್ತಿದೆ.
Photo credits – google |
ದಾವಣಗೆರೆ: ಚನ್ನಗಿರಿ ತಾಲೂಕಿನ ಬಸವಪಟ್ಟಣ ಹಾಗೂ ಕಂಸಾಗರ, ಹರೋಸಾಗರ ಗ್ರಾಮಗಳಲ್ಲಿ ಒಂದೇ ದಿನ ನಡೆದಿದ್ದ 12 ಮನೆಗಳ್ಳತನ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಜಂಟಿಯಾಗಿ ಒಟ್ಟು ಮೂರು ಪ್ರಕರಣಗಳು ಬಸವಪಟ್ಟಣ ಠಾಣೆಯಲ್ಲಿ ದಾಖಲಾಗಿದ್ದವು.
ಎಸ್ಪಿ ಉಮಾಪ್ರಶಾಂತ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೆಲವು ಮನೆ ಕಳ್ಳತನ ಆಗಿದ್ದವು. ಕೆಲವು ಕಳ್ಳತನದ ಪ್ರಯತ್ನ ನಡೆದಿದ್ದವು. ಈ ಪ್ರಕರಣ ಸಂಬಂಧ ಅಪ್ರಾಪ್ತ ಬಾಲಕ ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಇನ್ನು ಮೂವರ ಬಂಧನಕ್ಕೆ ಪ್ರಯತ್ನ ನಡೆದಿದೆ. ಬಂಧಿತರಿಂದ 45 ಗ್ರಾಂ ಬಂಗಾರ, 500 ಗ್ರಾಂ ಬೆಳ್ಳಿ, ಎರಡು ಬೈಕ್ ವಶಕ್ಕೆ ಪಡೆಯಲಾಗಿದೆ. ಇವರು ಕಡೂರು ಹಾಗೂ ಬಸವಪಟ್ಟಣದಲ್ಲಿ ಎರಡು ಬೈಕ್ ಕಳ್ಳತನ ಮಾಡಿದ್ದರು. ಬಸವಪಟ್ಟಣ ಕಂಮಸಾಗರ ಒಟ್ಟು 12 ಮನೆಗಳ ಪೈಕಿ 6 ಮನೆಯಲ್ಲಿ ಕಳ್ಳತನ ಆಗಿತ್ತು 6 ಕಡೆ ಕಳ್ಳತನ ಯತ್ನ ವಿಫಲ ಆಗಿತ್ತು. ಬಂಧಿತರು ದಾವಣಗೆರೆಯ ವಿವಿಧ ಠಾಣೆಗಳಲ್ಲಿ ಎರಡು ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಇನ್ನು ಮೂವರು ಬಂಧಿಸಬೇಕಾಗಿದೆ ಎಂದರು.