ನಟ ಡಾಲಿ ಧನಂಜಯ್‌ – ಧನ್ಯತಾ ಆರತಕ್ಷತೆ : ನವಜೋಡಿಗೆ ಶುಭ ಹಾರೈಸಿದ ಗಣ್ಯರು – DHANANJAYA AND DHANYATHA RECEPTION

 

ನಟ ಡಾಲಿ ಧನಂಜಯ್‌ – ಧನ್ಯತಾ ಆರತಕ್ಷತೆ : ನವಜೋಡಿಗೆ ಶುಭ ಹಾರೈಸಿದ ಗಣ್ಯರು – DHANANJAYA AND DHANYATHA RECEPTION

ನಟ ಡಾಲಿ ಧನಂಜಯ್ ಮತ್ತು ಧನ್ಯತಾ ಆರತಕ್ಷತೆ ಮೈಸೂರಿನಲ್ಲಿಂದು ಅದ್ಧೂರಿಯಾಗಿ ನಡೆಯಿತು.

ಮೈಸೂರು : ನಟ ಡಾಲಿ ಧನಂಜಯ್ ಮತ್ತು ಧನ್ಯತಾ ಆರತಕ್ಷತೆ ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿಂದು ಅದ್ಧೂರಿಯಾಗಿ ನಡೆಯಿತು. ಹಲವು ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು ಮತ್ತು ನೂರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭ ಹಾರೈಸಿದರು. ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್‌ ನವಜೋಡಿಗೆ ಶುಭ ಕೋರಿದರು.

ಸೆಲೆಬ್ರಿಟಿಗಳ ದಂಡು : ರೋರಿಂಗ್‌ ಸ್ಟಾರ್‌ ಶ್ರೀಮುರಳಿ , ದಿವಂಗತ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಪತ್ನಿ ಅಶ್ವಿನಿ ಪುನೀತ್‌ ರಾಜ್​ಕುಮಾರ್‌, ಅರುಣ್‌ ಸಾಗರ್‌, ನೀನಾಸಂ ಸತೀಶ್‌, ಮಾಳವಿಕಾ ಅವಿನಾಶ್‌, ತೆಲುಗಿನ ಬ್ಲಾಕ್‌ ಬಸ್ಟರ್‌ ಸಿನಿಮಾ ಪುಷ್ಪಾದ ನಿರ್ದೇಶಕ ಸುಕುಮಾರ್‌, ಹಿರಿಯ ಕಲಾವಿದೆ ಗಿರಿಜಮ್ಮ ಸೇರಿದಂತೆ ರಾಜಕೀಯ ಗಣ್ಯರಾದ ಮಾಜಿ ಸಚಿವ ಶ್ರೀರಾಮುಲು , ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌, ಮಾಜಿ ಡಿಸಿಎಂ ಅಶ್ವತ್ಥನಾರಾಯಣ್‌ ಸೇರಿದಂತೆ ಗಣ್ಯರು ಮತ್ತು ಅಭಿಮಾನಿಗಳು ಆಗಮಿಸಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನವಜೋಡಿಗೆ ಶುಭಾಶಯ ಕೋರಿದರು.

ಅರಮನೆ ಮುಂಭಾಗ ವಸ್ತುಪ್ರದರ್ಶನ ಪಾರ್ಕಿಂಗ್‌ ಯಾರ್ಡ್​ನಲ್ಲಿ ವಿವಾಹಕ್ಕೆ ಅದ್ಧೂರಿ ಸೆಟ್‌ ಹಾಕಲಾಗಿದ್ದು, ಭಾನುವಾರ ಬೆಳಗ್ಗೆ 9:10 ರಿಂದ 10:10ರ ವರೆಗೆ ಸಲ್ಲುವ ಶುಭ ಮೂಹೂರ್ತದಲ್ಲಿ ವಿವಾಹ ಜರುಗಲಿದೆ. ಸಂಕಷ್ಟ ಚತುರ್ದಶಿಯ ಶುಭ ಲಗ್ನದಲ್ಲಿ ನವಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.