ನಟ ಡಾಲಿ ಧನಂಜಯ್ – ಧನ್ಯತಾ ಆರತಕ್ಷತೆ : ನವಜೋಡಿಗೆ ಶುಭ ಹಾರೈಸಿದ ಗಣ್ಯರು – DHANANJAYA AND DHANYATHA RECEPTION
ನಟ ಡಾಲಿ ಧನಂಜಯ್ ಮತ್ತು ಧನ್ಯತಾ ಆರತಕ್ಷತೆ ಮೈಸೂರಿನಲ್ಲಿಂದು ಅದ್ಧೂರಿಯಾಗಿ ನಡೆಯಿತು.
ಮೈಸೂರು : ನಟ ಡಾಲಿ ಧನಂಜಯ್ ಮತ್ತು ಧನ್ಯತಾ ಆರತಕ್ಷತೆ ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿಂದು ಅದ್ಧೂರಿಯಾಗಿ ನಡೆಯಿತು. ಹಲವು ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು ಮತ್ತು ನೂರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭ ಹಾರೈಸಿದರು. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ನವಜೋಡಿಗೆ ಶುಭ ಕೋರಿದರು.
ಸೆಲೆಬ್ರಿಟಿಗಳ ದಂಡು : ರೋರಿಂಗ್ ಸ್ಟಾರ್ ಶ್ರೀಮುರಳಿ , ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್, ಅರುಣ್ ಸಾಗರ್, ನೀನಾಸಂ ಸತೀಶ್, ಮಾಳವಿಕಾ ಅವಿನಾಶ್, ತೆಲುಗಿನ ಬ್ಲಾಕ್ ಬಸ್ಟರ್ ಸಿನಿಮಾ ಪುಷ್ಪಾದ ನಿರ್ದೇಶಕ ಸುಕುಮಾರ್, ಹಿರಿಯ ಕಲಾವಿದೆ ಗಿರಿಜಮ್ಮ ಸೇರಿದಂತೆ ರಾಜಕೀಯ ಗಣ್ಯರಾದ ಮಾಜಿ ಸಚಿವ ಶ್ರೀರಾಮುಲು , ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಮಾಜಿ ಡಿಸಿಎಂ ಅಶ್ವತ್ಥನಾರಾಯಣ್ ಸೇರಿದಂತೆ ಗಣ್ಯರು ಮತ್ತು ಅಭಿಮಾನಿಗಳು ಆಗಮಿಸಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನವಜೋಡಿಗೆ ಶುಭಾಶಯ ಕೋರಿದರು.
ಅರಮನೆ ಮುಂಭಾಗ ವಸ್ತುಪ್ರದರ್ಶನ ಪಾರ್ಕಿಂಗ್ ಯಾರ್ಡ್ನಲ್ಲಿ ವಿವಾಹಕ್ಕೆ ಅದ್ಧೂರಿ ಸೆಟ್ ಹಾಕಲಾಗಿದ್ದು, ಭಾನುವಾರ ಬೆಳಗ್ಗೆ 9:10 ರಿಂದ 10:10ರ ವರೆಗೆ ಸಲ್ಲುವ ಶುಭ ಮೂಹೂರ್ತದಲ್ಲಿ ವಿವಾಹ ಜರುಗಲಿದೆ. ಸಂಕಷ್ಟ ಚತುರ್ದಶಿಯ ಶುಭ ಲಗ್ನದಲ್ಲಿ ನವಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.