Nandini River: ಮಂಗಳೂರಿನ ನಂದಿನಿ ನದಿ ಉಳಿವಿಗೆ ಸ್ಥಳೀಯರ ಹೋರಾಟ!| Locals fight to save Mangaluru’s Nandini River!

Nandini River: ಮಂಗಳೂರಿನ ನಂದಿನಿ ನದಿ ಉಳಿವಿಗೆ ಸ್ಥಳೀಯರ ಹೋರಾಟ!| Locals fight to save Mangaluru’s Nandini River!

Last Updated:

ಮತ್ಸ್ಯ ಬೇಟೆಯ ದಿನ ಪ್ರಸಾದ ಹಾರಿಸಿ, ಪಟಾಕಿ‌ ಸಿಡಿಸಿದರೆ ಮೀನು ಹಿಡಿಯಲು ಉಳ್ಳಾಯನ ಅಪ್ಪಣೆ ದೊರಕಿದಂತೆ. ಇಲ್ಲಿ ಹಿಡಿದ ಮೀನುಗಳನ್ನು ಸ್ಥಳೀಯರು ಉಳ್ಳಾಯನ ಪ್ರಸಾದವೆಂದೇ ತಿಳಿದು ಪದಾರ್ಥ ಮಾಡಿ ಸೇವಿಸುತ್ತಾರೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಮಂಗಳೂರು ನಗರದ(Mangaluru City) ಹೊರವಲಯದ ಕಂಡೇವಿನಲ್ಲಿ ನಂದಿನಿ ನದಿ (Nandini River) ಸಂಪೂರ್ಣ ಕಲುಷಿಗೊಂಡಿದ್ದು, ವರ್ಷಕ್ಕೊಮ್ಮೆ ಕಂಡೇವು ಧರ್ಮರಸು ಉಳ್ಳಾಯನ ಹೆಸರಿನಲ್ಲಿ ನಡೆಯುವ ಮೀನು ಹಿಡಿಯುವ ಜಾತ್ರೆಗೆ ಕಂಟಕ ಎದುರಾಗಿದೆ. ಅಲ್ಲದೇ ಜನರ ಆರೋಗ್ಯದ(Health) ಆತಂಕವೂ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರಿಂದ ನಂದಿನಿ ನದಿ ಉಳಿಸಿ ಹೋರಾಟ ನಡೆದಿದೆ.

ಕಂಡೇವಿನ ಧರ್ಮರಸು ಉಳ್ಳಾಯ ದೈವಸ್ಥಾನಕ್ಕೆ 800 ವರ್ಷಗಳ ಇತಿಹಾಸವಿದೆ. ಇಲ್ಲಿನ ವರ್ಷಾವಧಿ ಮೀನು ಹಿಡಿಯುವ ಜಾತ್ರೆಗೂ ಅಷ್ಟೇ ಪುರಾತನ ಇತಿಹಾಸವಿದೆ. ಕಂಡೇವಿನ ವರ್ಷಾವಧಿ ಜಾತ್ರೆಯ ನಿರ್ದಿಷ್ಟ ದಿನದ ಹೊರತು ಮಿಕ್ಕ ದಿನಗಳಲ್ಲಿ ಯಾರೂ ಈ ವ್ಯಾಪ್ತಿಯ ನಂದಿನಿ ನದಿಯಲ್ಲಿ ಮೀನು ಹಿಡಿಯುವಂತಿಲ್ಲ. ಅಂದರೆ ಇಲ್ಲಿನ ಮತ್ಸ್ಯಸಂತತಿ ಉಳ್ಳಾಯ ದೈವದ ಸೊತ್ತು‌. ಆತನ ಅಪ್ಪಣೆಯಿಲ್ಲದೆ ಯಾರೂ ಮೀನು ಹಿಡಿಯುವಂತಿಲ್ಲ. ಮತ್ಸ್ಯ ಬೇಟೆಯ ದಿನ ಪ್ರಸಾದ ಹಾರಿಸಿ, ಪಟಾಕಿ‌ ಸಿಡಿಸಿದರೆ ಮೀನು ಹಿಡಿಯಲು ಉಳ್ಳಾಯನ ಅಪ್ಪಣೆ ದೊರಕಿದಂತೆ. ಇಲ್ಲಿ ಹಿಡಿದ ಮೀನುಗಳನ್ನು ಸ್ಥಳೀಯರು ಉಳ್ಳಾಯನ ಪ್ರಸಾದವೆಂದೇ ತಿಳಿದು ಪದಾರ್ಥ ಮಾಡಿ ಸೇವಿಸುತ್ತಾರೆ.

ಇದನ್ನೂ ಓದಿ: Mysuru: ಕಾಡಾನೆ ದಾಳಿಯಲ್ಲಿ ಮೃತಪಟ್ಟ ಅಧಿಕಾರಿಯ ಪ್ರತಿಮೆ ನಿರ್ಮಾಣ!

ಆದರೆ ಕಳೆದ ಏಳೆಂಟು ವರ್ಷಗಳಿಂದ ಸ್ಥಳೀಯ ಆಸ್ಪತ್ರೆಯ ತ್ಯಾಜ್ಯ, ವಸತಿ ಸಮುಚ್ಚಯಗಳ ಯುಜಿಡಿ ತ್ಯಾಜ್ಯ ನೇರವಾಗಿ ನಂದಿನಿ ನದಿಯನ್ನು ಸೇರಿ ನದಿ ಕೊಳಚೆ ಕೊಂಪೆಯಾಗಿದೆ. ಕಪ್ಪೇರಿರುವ ನೀರಿನಲ್ಲಿ ಮತ್ಸ್ಯ ಸಂತತಿ ಮಾಯವಾಗಿದೆ. ಸೇತುವೆಯ ಒಂದು ಬದಿಯ ನದಿಯುದ್ದಕ್ಕೆ ‘ಅಂತರಗಂಗೆ’ ಎಂಬ ಕಳೆ ಗಿಡ ಬೆಳೆದಿದೆ. ಇದರಿಂದ ಈ ಬಾರಿ ಖಂಡಿಗೆ ಜಾತ್ರೆಯ ವೇಳೆ ಮೀನು ಹಿಡಿಯುವುದು ಅಸಾಧ್ಯವಾದ ಮಾತು. ತ್ಯಾಜ್ಯ ನೇರವಾಗಿ ನದಿ ಸೇರುವುದನ್ನು ತಡೆಯದೆ ನದಿ ನೀರು ಸ್ವಚ್ಚವಾಗುವುದು ಸಾಧ್ಯವಿಲ್ಲ. ಆದ್ದರಿಂದ ಸ್ಥಳೀಯರೇ ನಂದಿನಿ ನದಿ ಉಳಿಸಿ ಎಂಬ ಹೋರಾಟ ಮಾಡಿದ್ದಾರೆ.

ಜನಪ್ರತಿನಿಧಿಗಳು, ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿ ಮಧ್ಯಪ್ರವೇಶಿಸಿ, ತ್ಯಾಜ್ಯ ನೇರವಾಗಿ ನದಿ ಸೇರುವುದನ್ನು ತಡೆಯದೆ ನದಿಯ ಸ್ವಚ್ಚತೆ, ಮತ್ಸ್ಯ ಸಂತತಿ ಉಳಿಸುವ ಕೆಲಸ ಸಾಧ್ಯವಿಲ್ಲ. ಆದ್ದರಿಂದ ನಂದಿನಿ ನದಿ ಉಳಿಸಲು ಎಲ್ಲರ ಕೈ ಜೋಡಿಸುವಿಕೆಯ ಅಗತ್ಯವಿದೆ.