ಆಸಿಡ್ ದಾಳಿಯಿಂದ ತನ್ನೆರಡೂ ಕಣ್ಣು ಕಳೆದುಕೊಂಡರೂ ಎದೆಗುಂದಲಿಲ್ಲ: ಮಹಿಳಾ ಸಬಲೀಕರಣದ ಐಕಾನ್ ಆದ ಕವಿತಾ – ACID ATTACK SURVIVOR KAVITA BISHT
courtesy : ETV Bharat |
ಆಸಿಡ್ ದಾಳಿಯಿಂದ ತನ್ನ ಎರಡೂ ಕಣ್ಣುಗಳ ದೃಷ್ಟಿ ಕಳೆದುಕೊಂಡಿದ್ದರೂ ಮಹಿಳೆಯರನ್ನು ಸಬಲೀಕರಣಗೊಳಿಸಲು ಪಣತೊಟ್ಟಿರುವ ಕವಿತಾ ಬಿಶ್ತ್ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಸ್ಥಿತಿಸ್ಥಾಪಕತ್ವ ಮತ್ತು ಧೈರ್ಯದ ಕಟುವಾದ ನಿರೂಪಣೆಯಲ್ಲಿ, ಕವಿತಾ ಬಿಷ್ಟ್ ಅವರ ಅದಮ್ಯ ಚೈತನ್ಯವು ಹೊರಹೊಮ್ಮುತ್ತದೆ, ಆಸಿಡ್ ದಾಳಿಯಿಂದ ಬದುಕುಳಿದವರ ಕಥೆಯು ಕೇವಲ ದುರಂತದ ಗಡಿಗಳನ್ನು ಮೀರಿದೆ. ತನ್ನ ಚರ್ಮದ ಮೇಲೆ ಕೆತ್ತಿದ ಪ್ರತಿಯೊಂದು ಗಾಯದ ಜೊತೆಗೆ, ಅವಳು ಕ್ರೂರತೆಯ ಕರಾಳ ನೆರಳುಗಳ ವಿರುದ್ಧ ಮಾನವ ಇಚ್ಛೆಯ ವಿಜಯವನ್ನು ಸಾಕಾರಗೊಳಿಸುತ್ತಾಳೆ. ಕವಿತಾ ಅವರ ಪಯಣ ಕೇವಲ ಬದುಕುಳಿಯುವ ಕಥೆಯಲ್ಲ; ಇದು ಮಾನವ ಹೃದಯದ ಶಕ್ತಿಗೆ ಪ್ರಬಲವಾದ ಸಾಕ್ಷಿಯಾಗಿದೆ, ಹೇಳಲಾಗದ ಪ್ರತಿಕೂಲತೆಯ ಮುಖಾಂತರವೂ ಭರವಸೆಯು ಹೊಸದಾಗಿ ಅರಳುತ್ತದೆ ಎಂಬ ಘೋಷಣೆಯಾಗಿದೆ.
ರಾಮ್ನಗರ( ಉತ್ತರಾಖಂಡ): ಆಸಿಡ್ ದಾಳಿಯಿಂದ ತನ್ನ ಎರಡೂ ಕಣ್ಣುಗಳ ದೃಷ್ಟಿ ಕಳೆದುಕೊಂಡಿದ್ದರೂ ಕವಿತಾ ಬಿಶ್ತ್ ಎಂಬುವರು ಸಮಾಜಕ್ಕೆ ಸ್ಫೂರ್ತಿಯಾಗಿದ್ದಾರೆ. ಹೌದು, ಕವಿತಾ ತನಗಾದ ನೋವಿನಿಂದನಿಂದ ಹೊರ ಬಂದು ತನ್ನ ಜೀವನ ರೂಪಿಸಿಕೊಂಡಿದ್ದಲ್ಲದೇ, ಹಲವು ಮಹಿಳೆಯರಿಗೆ ಉದ್ಯೋಗಾವಕಾಶ ನೀಡಿದ್ದಾರೆ.
ಹಲ್ದ್ವಾನಿ ಮೂಲದವರಾದ ಕವಿತಾ ಅವರು ದೆಹಲಿಯ ಬಳಿಯ ಖೋಡಾ ಕಾಲೋನಿಯಲ್ಲಿ ಕೆಲಸ ಮಾಡುತ್ತಿ ಸಂದರ್ಭದಲ್ಲಿ ಯುವಕನೊಬ್ಬನಿಂದ ಆಸಿಡ್ ದಾಳಿಗೆ ಒಳಗಾಗಿದ್ದರು. ಆಗ ಅವರ ವಯಸ್ಸು 19 ವರ್ಷ. ಈ ದಾಳಿಯಿಂದಾಗಿ ಕವಿತಾ ತೀವ್ರ ನಿಗಾ ಘಟಕದಲ್ಲಿ (ICU) 34 ದಿನಗಳ ಕಾಲ ಜೀವನ್ಮರಣದ ಹೋರಾಟ ನಡೆಸಿ ಬದುಕುಳಿದರು. ಆದರೆ, ಅವರು ಎರಡೂ ಕಣ್ಣುಗಳನ್ನು ಕಳೆದುಕೊಂಡರು. ಹೀಗಿದ್ದರೂ ಅವರು ಮಾತ್ರ ಎದೆಗುಂದಲಿಲ್ಲ, ಕಷ್ಟಗಳನ್ನು ಎದುರಿಸುತ್ತಿರುವ ಇತರ ಮಹಿಳೆಯರಿಗೆ ಸಹಾಯ ಮಾಡಲು ನಿರ್ಧರಿಸಿದರು.
ಕವಿತಾ ವಿಮೆನ್ ಸಪೋರ್ಟ್ ಹೋಂ (ETV Bharat) |
ಮಹಿಳೆಯರ ಸ್ವಾವಲಂಬೀ ಜೀವನಕ್ಕೆ ಸಹಾಯ: ಉತ್ತರಾಖಂಡ ಸರ್ಕಾರವು ಕವಿತಾ ಅವರ ಛಲವನ್ನು ಗುರುತಿಸಿ, 2015 ರಲ್ಲಿ ಅವರನ್ನು ಮಹಿಳಾ ಸಬಲೀಕರಣದ ಬ್ರ್ಯಾಂಡ್ ಅಂಬಾಸಿಡರನ್ನಾಗಿ ಮಾಡಿತು. ಜೊತೆಗೆ 13,500 ರೂ. ಗೌರವ ಧನವನ್ನು ನೀಡಿತು. ಆದರೆ, ಬದಲಾದ ಸರ್ಕಾರ ಈ ಆರ್ಥಿಕ ನೆರವನ್ನು ಹಿಂತೆಗೆದುಕೊಂಡಿತು. ಆದರೂ ಕವಿತಾ ಭರವಸೆ ಕಳೆದುಕೊಳ್ಳಲಿಲ್ಲ. ನೈನಿತಾಲ್ ಜಿಲ್ಲೆಯ ರಾಮ್ನಗರದ ಜಸ್ಸಾ ಗಂಜಾದಲ್ಲಿ ಕವಿತಾ ವಿಮೆನ್ ಸಪೋರ್ಟ್ ಹೋಂ ಸ್ಥಾಪಿಸಿದರು, ಇಲ್ಲಿ ಅವರು ಮಹಿಳೆಯರಿಗೆ ಕಸೂತಿ, ಹೆಣಿಗೆ, ಹೊಲಿಗೆ ಮತ್ತು ಕರಕುಶಲ ವಸ್ತುಗಳನ್ನು ತಯಾರಿಸುವ ಕುರಿತು ತರಬೇತಿ ನೀಡುತ್ತಾರೆ. ಈ ಮೂಲಕ ಅವರು 159 ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸಹಾಯ ಮಾಡಿದ್ದಾರೆ. ಪ್ರಸ್ತುತ 50ಕ್ಕೂ ಹೆಚ್ಚು ಮಹಿಳೆಯರು ಇಲ್ಲಿ ಕೆಲಸ ಮಾಡುತ್ತಿದ್ದಾರೆ.
ಬಟ್ಟೆ ಹೊಲಿಯುತ್ತಿರುವ ಮಹಿಳೆಯರು (ETV Bharat) |
ತರಬೇತಿ ಪಡೆದ ಮಹಿಳೆಯರು, ಕರಕುಶಲ ಕುಶನ್ಗಳು, ಬ್ಯಾಗ್ಗಳು, ಪರದೆಗಳು, ಹಣತೆಗಳು ಮತ್ತು ಕೈಯಿಂದ ತಯಾರಿಸಿದ ಇತರ ಉತ್ಪನ್ನಗಳನ್ನು ಆರ್ಡರ್ ಪಡೆದು ಮಾರಾಟ ಮಾಡುತ್ತಾರೆ. ಇದರಿಂದ ಬರುವ ಆದಾಯ ಅನೇಕ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಸಾಧಿಸಲು ಮತ್ತು ಅವರ ಕುಟುಂಬಗಳ ಪೋಷಣೆಗೆ ನೆರವಾಗಿದೆ.
ಮಹಿಳೆಯರು ತಯಾರಿಸಿರುವ ಬ್ಯಾಗ್ಗಳು (ETV Bharat) |
ಮಹಿಳೆಯರನ್ನು ಸಬಲೀಕರಣಗೊಳಿಸುವುದು ನನ್ನ ಗುರಿ: ಕವಿತಾ ಮಾತನಾಡಿ, ನಾನೂ ಜಗತ್ತನ್ನು ನೋಡುತ್ತಿದ್ದೆ. ಆಸಿಡ್ ದಾಳಿಯ ನಂತರ ನನ್ನ ದೃಷ್ಟಿಯನ್ನು ಕಳೆದುಕೊಂಡೆ. ಆರಂಭದಲ್ಲಿ, ನಾನು ಖಿನ್ನತೆಗೆ ಒಳಗಾದೆ. ಬಳಿಕ ನನಗೆ ನಾನೇ ಧೈರ್ಯ ತುಂಬಿಕೊಂಡು ಸಕಾರಾತ್ಮಕತೆಯಿಂದ ಮುಂದುವರೆದೆ. ನಾನು ಸರ್ಕಾರದ ಬೆಂಬಲದಿಂದಾಗಿ ಕೆಲಸ ಮಾಡುತ್ತಿರಲಿಲ್ಲ. ಮಹಿಳೆಯರನ್ನು ಸಬಲೀಕರಣಗೊಳಿಸುವುದು ನನ್ನ ಗುರಿ, ನಾನು ಅದನ್ನು ಮುಂದುವರಿಸುತ್ತೇನೆ. ನಾವು ನಮ್ಮ ಶಕ್ತಿಯನ್ನು ಗುರುತಿಸಿದರೆ, ನಮ್ಮನ್ನು ಯಾವುದೂ ತಡೆಯಲು ಸಾಧ್ಯವಿಲ್ಲ ಎಂದರು.
ಕುಶನ್ಗಳು ಮತ್ತು ದಿಂಬುಗಳು (ETV Bharat) |
ಕವಿತಾ ಕೇವಲ ಒಬ್ಬ ಮಹಿಳೆಯಲ್ಲ, ಅವರು ನಮಗೆ ದೇವತೆ ಎಂದು ಕವಿತಾ ವಿಮೆನ್ ಸಪೋರ್ಟ್ ಹೋಂನಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ಹೇಳಿದರು.
ಮಹಿಳೆಯರು ತಯಾರಿಸಿದ ಹಣತೆ (ETV Bharat) |
ಕವಿತಾಗೆ ಬೆಂಬಲದ ಅಗತ್ಯ: ರಾಮ್ನಗರದ ಪಿಎನ್ಜಿ ಸರ್ಕಾರಿ ಪಿಜಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಸಿ. ಪಾಂಡೆ ಮಾತನಾಡಿ, ಕವಿತಾ ಮಹಿಳಾ ಸಬಲೀಕರಣದ ಸಂಕೇತವಾಗಿದ್ದು, ಅವರಿಗೆ ಹೆಚ್ಚಿನ ಬೆಂಬಲದ ಅಗತ್ಯವಿದೆ. ಸರ್ಕಾರ ಮತ್ತು ಸಮಾಜವು ಅವರಿಗೆ ಸಹಾಯ ಮಾಡಲು ಮುಂದೆ ಬರಬೇಕು. ಕವಿತಾ ವಿಮೆನ್ ಸಪೋರ್ಟ್ ಹೋಂ ಬೆಳೆದರೆ, ಹೆಚ್ಚಿನ ಮಹಿಳೆಯರು ಸ್ವಾವಲಂಬಿಗಳಾಗಬಹುದು” ಎಂದರು.