Dakshina Kannada: ಕುಕ್ಕೆ ಸುಬ್ರಹ್ಮಣ್ಯದಲ್ಲೊಂದು ನಾಗೋದ್ಯಾನ- ಇಲ್ಲಿವೆ ಸಾವಿರಕ್ಕೂ ಹೆಚ್ಚು ನಾಗರಹಾವುಗಳು! | A snake park in Kukke Subrahmanya – there are over a thousand cobras here!

Dakshina Kannada: ಕುಕ್ಕೆ ಸುಬ್ರಹ್ಮಣ್ಯದಲ್ಲೊಂದು ನಾಗೋದ್ಯಾನ- ಇಲ್ಲಿವೆ ಸಾವಿರಕ್ಕೂ ಹೆಚ್ಚು ನಾಗರಹಾವುಗಳು! | A snake park in Kukke Subrahmanya – there are over a thousand cobras here!

Last Updated:

ನಾಗಗಳು ಮೊಟ್ಟೆ ಇಡಲು, ಸಂತಾನೋತ್ಪತ್ತಿ ಕ್ರಿಯೆ ನಡೆಸಲು ಅನುವಾಗುವಂತೆ ಈ ಪ್ರದೇಶವನ್ನು ಮೀಸಲಿಡಲಾಗಿದೆ. ನಾಗಗಳಿಗೆ ಬೇಕಾದ ನೀರಿನ ವ್ಯವಸ್ಥೆಗಾಗಿ ಈ ಪ್ರದೇಶದಲ್ಲಿ ಅಡಿಕೆ ಮರಗಳನ್ನು ಬೆಳೆಯಲಾಗಿದೆ. ಆ ಮರಗಳಿಗೆ ಹಾಕಲು ಬೇಕಾದ ನೀರಿನ ಜೊತೆಗೆ‌ ನಾಗಗಳಿಗೂ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಹೆಸರಾಂತ ನಾಗಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ(Dakshina Kannada District) ಕಡಬ ತಾಲೂಕಿನ ಕುಕ್ಕೆ ಸುಬ್ರಮಣ್ಯದಲ್ಲಿ(Kukke Subramanya) ವಾಸುಕೀ ಸುಬ್ರಹ್ಮಣ್ಯ ದೇವರು ನೆಲೆಯಾಗಿದ್ದಾರೆ. ಇದೇ ಕಾರಣಕ್ಕಾಗಿಯೇ ನಾಗಗಳ ಅವಾಸಸ್ಥಾನವಾಗಿಯೂ ಕುಕ್ಕೆ ಸುಬ್ರಹ್ಮಣ್ಯ ಗುರುತಿಸಿಕೊಂಡಿದೆ. ಇದೇ ಕಾರಣಕ್ಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗಗಳ(Cobras) ಸಂತಾನೋತ್ಪತ್ತಿ ಮತ್ತು‌ ತಿರುಗಾಟಕ್ಕೆಂದೇ ಮೀಸಲಿಟ್ಟ ಜಾಗವೊಂದಿದೆ. ನಾಗೋದ್ಯಾನ(Snake Park) ಎನ್ನುವ ಹೆಸರಿನಲ್ಲಿ ಈ ಜಾಗವನ್ನು ಕರೆಯಲಾಗುತ್ತಿದ್ದು, ಈ ಪ್ರದೇಶದಲ್ಲಿ ಸಾವಿರಕ್ಕೂ ಹೆಚ್ಚಿನ ನಾಗರಹಾವುಗಳಿವೆ.

ಹೌದು, ಇದು ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪಕ್ಕದಲ್ಲೇ ಇರುವ ನಾಗೋದ್ಯಾನ ಕುರಿತ ಸ್ಟೋರಿ. ಸುಮಾರು 4 ಎಕರೆ ಭೂ ಪ್ರದೇಶವನ್ನು ಹೊಂದಿರುವ ಈ ಜಾಗದಲ್ಲಿ ನಾಗನಿಗೆ‌ ಇಷ್ಟವಾದ ಸಂಪಿಗೆ, ನಾಗಸಂಪಿಗೆ, ನಾಗರಬೆತ್ತ ಸೇರಿದಂತೆ ಹಲವು ರೀತಿಯ ನೈಸರ್ಗಿಕ ಮರಗಳಿವೆ. ನಾಗೋದ್ಯಾನದ ಮಧ್ಯೆ ಅತ್ಯಂತ ಹಳೆಯ ಕಾಲದ ನಾಗನ ಕಟ್ಟೆಯೂ ಇದ್ದು, ಕುಕ್ಕೆ ಸುಬ್ರಹ್ಮಣ್ಯದ ಅರ್ಚಕರು ಪ್ರತೀ ದಿನ ಬೆಳಗ್ಗೆ ಬಂದು ಈ ಕಟ್ಟೆಯಲ್ಲಿ ದೀಪ ಹಚ್ಚಿ ತೆರಳುತ್ತಾರೆ. ನಾಗಗಳು ಮೊಟ್ಟೆ ಇಡಲು, ಸಂತಾನೋತ್ಪತ್ತಿ ಕ್ರಿಯೆ ನಡೆಸಲು ಅನುವಾಗುವಂತೆ ಈ ಪ್ರದೇಶವನ್ನು ಮೀಸಲಿಡಲಾಗಿದೆ. ನಾಗಗಳಿಗೆ ಬೇಕಾದ ನೀರಿನ ವ್ಯವಸ್ಥೆಗಾಗಿ ಈ ಪ್ರದೇಶದಲ್ಲಿ ಅಡಿಕೆ ಮರಗಳನ್ನು ಬೆಳೆಯಲಾಗಿದೆ. ಆ ಮರಗಳಿಗೆ ಹಾಕಲು ಬೇಕಾದ ನೀರಿನ ಜೊತೆಗೆ‌ ನಾಗಗಳಿಗೂ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಇದನ್ನೂ ಓದಿ: Social Service: ಸಕ್ಕರೆನಾಡು ಮಂಡ್ಯದಲ್ಲಿದ್ದಾರೆ ಭಿಕ್ಷುಕರ ಬ್ಯೂಟಿಷಿಯನ್- ಈಕೆ ನಿರ್ಗತಿಕರ ಪಾಲಿನ ವರ!

ದೇವಸ್ಥಾನದ ಅರ್ಚಕರಲ್ಲದೆ ಈ ಉದ್ಯಾನದ ಒಳಗೆ ಯಾರಿಗೂ ಪ್ರವೇಶವಿಲ್ಲ. ಆದರೆ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ನಾಗರಹಾವುಗಳಿದ್ದು,ಇವುಗಳು ಕೆಲವು ಸಂದರ್ಭಗಳಲ್ಲಿ ಕಾಡು ಬಿಟ್ಟು ಹೊರಗೆ ಬರುತ್ತವೆ. ಈ ಸಮಯದಲ್ಲಿ ಇವುಗಳು ಪಕ್ಕದ ಮನೆಗಳಿಗೆ, ಅಂಗಡಿಗಳಿಗೆ ನುಗ್ಗುತ್ತಿವೆ. ಇವುಗಳನ್ನು ಮತ್ತೆ ಅದೇ ಪ್ರದೇಶಕ್ಕೆ ಬಿಡುವುದಕ್ಕಾಗಿ ಹಾವು ಹಿಡಿಯುವ ವ್ಯಕ್ತಿಗಳಿಗೆ ಇಲ್ಲಿಗೆ ತೆರಳಲು ಅವಕಾಶವನ್ನು ಕಲ್ಪಿಸಲಾಗಿದೆ. ಸುಬ್ರಹ್ಮಣ್ಯ ಆಸುಪಾಸು ಯಾವ ಭಾಗದಲ್ಲಿ ನಾಗರಹಾವುಗಳು ಕಂಡು ಬಂದರೂ , ಅವುಗಳನ್ನು ಇದೇ ಜಾಗದಲ್ಲಿ ಬಿಡಲಾಗುತ್ತದೆ. ಇದೇ ಕಾರಣಕ್ಕೆ ಈ ನಾಗೋದ್ಯಾನದಲ್ಲಿ ಸಾವಿರಾರು ಸಂಖ್ಯೆಯ ನಾಗರಹಾವುಗಳಿದ್ದು, ಇವುಗಳು ಈ ಪ್ರದೇಶವನ್ನು ಬಿಟ್ಟು ಕೆಲವೊಮ್ಮೆ ಮಾತ್ರ ಹೊರಗೆ ಬರುತ್ತವೆ.

ಮಳೆಗಾಲದಲ್ಲಿ ಮತ್ತು ಸಂಗಾತಿಯ ಹುಡುಕಾಟದ ಸಂದರ್ಭದಲ್ಲಿ ನಾಗರಹಾವುಗಳು ಈ ಪ್ರದೇಶದಿಂದ ಇತರ ಕಡೆಗಳಿಗೆ ಸಂಚರಿಸುತ್ತದೆ. ಬೇಸಿಗೆಯ ಬಿಸಿಲಿಗೆ ಇವುಗಳು ಇಲ್ಲಿರುವ ಪೊಟರೆಗಳಲ್ಲಿ ವಿಶ್ರಮಿಸುತ್ತವೆ. ಕ್ಷೇತ್ರದ ಸುತ್ತಲೂ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದರೂ, ನಾಗಗಳಿರುವ ಈ ಪ್ರದೇಶವನ್ನು ಹಾಗೆಯೇ ಸಂರಕ್ಷಿಸಿಕೊಂಡು ಬರಲಾಗಿದೆ.