ವಿಧಾನಸಭೆಯಲ್ಲಿ ಸದ್ದು ಮಾಡಿದ ಬೀದಿನಾಯಿಗಳ ಕಾಟದ ವಿಚಾರ; ಗಮನ ಸೆಳೆದ ನಾಗರಹಾವು ಪ್ರಸ್ತಾಪ ! – INTERESTING DISCUSSION

ವಿಧಾನಸಭೆಯಲ್ಲಿ ಸದ್ದು ಮಾಡಿದ ಬೀದಿನಾಯಿಗಳ ಕಾಟದ ವಿಚಾರ; ಗಮನ ಸೆಳೆದ ನಾಗರಹಾವು ಪ್ರಸ್ತಾಪ ! – INTERESTING DISCUSSION

ಅಪಾರ್ಟ್​ಮೆಂಟ್​ನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಈ ಬಗ್ಗೆ

ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು. ( INTERESTING DISCUSSION ON STREET DOGS )

DISCUSSION
ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ

ಬೆಂಗಳೂರು : ರಾಜಧಾನಿ ಬೆಂಗಳೂರು ನಗರದಲ್ಲಿ ಬೀದಿ ನಾಯಿಗಳಿಂದಾಗುತ್ತಿರುವ ತೊಂದರೆಯ ವಿಚಾರ ವಿಧಾನಸಭೆಯಲ್ಲಿ ಇಂದು ಪ್ರತಿಧ್ವನಿಸಿ ಸದಸ್ಯರ

ನಡುವೆ ಸ್ವಾರಸ್ಯಕರ ಚರ್ಚೆ ನಡೆಯಿತು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ: ಇಂದು ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ವಿಷಯ ಪ್ರಸ್ತಾಪಿಸಿ, ಬೀದಿನಾಯಿಗಳ

ಹಾವಳಿಯಿಂದ ತೊಂದರೆಯಾಗುತ್ತಿದೆ. ಸನ್ಸಿಟಿ ಅಪಾರ್ಟ್​ಮೆಂಟ್ 18ನೇ ಮಹಡಿಗೆ ಬೀದಿನಾಯಿಗಳನ್ನು ಮಹಿಳೆಯೊಬ್ಬರು ಕರೆದೊಯ್ದಿದ್ದಾರೆ. ಇದರಿಂದ

ತೊಂದರೆಯಾಗುತ್ತಿದೆ. ಅಲ್ಲಿನ ನಿವಾಸಿಗಳಿಗೆ ಆ ಬೀದಿ ನಾಯಿಗಳು ಕಚ್ಚಿವೆ. ಬಿಬಿಎಂಪಿ ಗಮನಕ್ಕೆ ತಂದರೂ ಯಾವುದೇ ಕ್ರಮವಾಗಿಲ್ಲ. ಆ ನಾಯಿಗಳು

ಅಪಾರ್ಟ್​ಮೆಂಟ್​ನಿಂದ ಹೊರಹೋಗಬೇಕು. ಬೀದಿನಾಯಿಗಳ ನಿರ್ವಹಣೆಗೆ 5 ಕೋಟಿ ರೂ. ಬಜೆಟ್ ಇರುತ್ತದೆ. ಈ ಸಂಬಂಧ ಪೊಲೀಸ್ ಇಲಾಖೆ

ಹಾಗೂ ಬಿಬಿಎಂಪಿಗೆ ಸ್ಪಷ್ಟ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

 Discussion On Snakes And Street Dogs In Legislative Assembly
ಬಿಜೆಪಿ ಶಾಸಕ ಸತೀಶ್ ರೆಡ್ಡಿ

ವಿಧಾನಸೌಧದ ಸುತ್ತವೇ ಇವೆಯಂತೆ 1500 ಬೀದಿ ನಾಯಿಗಳು: ಮಧ್ಯ ಪ್ರವೇಶಿಸಿ ಮಾತನಾಡಿದ ಪ್ರತಿಪಕ್ಷದ ನಾಯಕ ಆರ್.ಅಶೋಕ್,

ವಿಧಾನಸಭೆಯ ಸುತ್ತಮುತ್ತ 1500 ನಾಯಿಗಳಿರುವ ಬಗ್ಗೆ ಸಭಾಧ್ಯಕ್ಷರು ಸಭೆ ನಡೆಸಿದ್ದಾರೆ. ಬೀದಿ ನಾಯಿಗಳೆಲ್ಲಾ ಬೀದಿಯಲ್ಲೇ ಇರಲಿ,

ಅಪಾರ್ಟ್​ಮೆಂಟ್​ಗೆ ಬರುವುದು ಬೇಡ ಎಂದರು.

ಈ ಬಗ್ಗೆ ಸಿಎಸ್​ ಜತೆ ಮಾತನಾಡಿದ್ದೇನೆ ಎಂದ ಸ್ಪೀಕರ್​: ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಬೀದಿ ನಾಯಿಗಳಿಗೆ

ಗೌರವಪೂರ್ವಕ ಬದುಕು ಕೊಡಬೇಕೆಂಬ ಉದ್ದೇಶದಿಂದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ಮಾಡಿದ್ದೇವೆ

ಎಂದು ಹೇಳಿದರು.

 Discussion About  Snakes And Street Dogs In Legislative Assembly
ಪ್ರತಿಪಕ್ಷದ ನಾಯಕ R-Ashok

ಬೀದಿ ನಾಯಿ ಅಷ್ಟೇ ಅಲ್ಲ ವಿಧಾನಸೌಧಕ್ಕೆ ನಾಗರಹಾವು ಬಂದಿತ್ತು ಎಂದ ಶಾಸಕ: ಬಿಜೆಪಿಯ ಮತ್ತೊಬ್ಬ ಶಾಸಕ ಬಿ.ಪಿ.ಹರೀಶ್

ಮಾತನಾಡಿ, ಬೀದಿ ನಾಯಿಗಳಷ್ಟೇ ಅಲ್ಲ, ವಿಧಾನಸೌಧಕ್ಕೆ ನಾಗರಹಾವು ಸಹ ಬಂದಿದೆ ಎಂದು ಗಮನ ಸೆಳೆದರು. ಆಗ ಸಭಾಧ್ಯಕ್ಷರು ನಾಯಿಯಷ್ಟೇ ಅಲ್ಲ,

ನಾಗರಹಾವೂ ಇರಬೇಕು, ನಿಧಿ ಕಾಯುವುದು ನಾಗರಹಾವೇ ಅಲ್ಲವೇ? ಎಂದರು.

Interesting Discussion On Snakes And Street Dogs In Legislative Assembly
Health minister – Dinesh Gundurav

ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬೊಮ್ಮನಹಳ್ಳಿ ಭಾಗದಲ್ಲಿ ಶಾಸಕ ಸತೀಶ್ ರೆಡ್ಡಿಯವರಿಗೆ ಗೊತ್ತಿಲ್ಲದೆ

ನಾಯಿ ಕೂಡ ಅಲ್ಲಾಡುವುದಿಲ್ಲ. ಅಪಾರ್ಟ್​ಮೆಂಟ್​ಗೆ ಸೆಕ್ಯೂರಿಟಿ ಇರುತ್ತಾರೆ, ಕಾಂಪೌಂಡ್ ಇರುತ್ತದೆ, ಹೇಗೆ ಬಿಟ್ಟರು?

ಎಂದು ಪ್ರಶ್ನಿಸಿದರು. ಈ ಸಂಬಂಧ ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಹಾಗೂ ಪೊಲೀಸ್

ಇಲಾಖೆಗೆ ಸೂಚಿಸುವುದಾಗಿ ಹೇಳಿದರು.

Leave a Reply

Your email address will not be published. Required fields are marked *